ಗುರುಪಾಡ್ಯಮಿ

ದತ್ತಾತ್ರೇಯರ ಅವತಾರ ಎಂದೇ ನಂಬಲಾದ ಗಾಣಗಾಪುರದ ನರಸಿಂಹಸರಸ್ವತಿಗಳು ತಮ್ಮ ಅವತಾರವನ್ನು ಪೂರ್ಣಗೊಳಿಸಿದ ದಿನವನ್ನು ಗುರುಪಾಡ್ಯಮಿ ಎಂದು ಆಚರಿಸಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂದ್ರಪ್ರದೇಶದಲ್ಲಿ ಕೂಡ ಈ ಆಚರಣೆ ಇದೆ. ಈ ದಿನದಿಂದ ಆರಂಭಿಸಿ ಅನೇಕ ದತ್ತ ದೇವಸ್ಥಾನಗಳಲ್ಲಿ ದತ್ತ ನವರಾತ್ರಿಯನ್ನು ಆಚರಿಸಲಾಗುತ್ತದೆ.