ವಿಠಲಾಪುರ ಬಿಷ್ಟಪ್ಪಯ್ಯನವರ ಆರಾಧನೆ

ಬಿಷ್ಟಪ್ಪಯ್ಯನವರ ಕಾಲ ಸುಮಾರು ಕ್ರಿ. 1600. ಇವರು ಮುಂಡರಗಿ ತಾಲ್ಲೋಕು ವಿಠಲಾಪುರದವರು. ಸಾಕ್ಷಾತ್ಹಂಪೆಯ ವಿರೂಪಾಕ್ಷನ ಅವತಾರ ಎನ್ನುವುದು ನಂಬಿಕೆ. ಹಂಪೆಯುಹಾಳು ಬಿದ್ದಾಗ ಅಲ್ಲಿನ ದೇವತೆಗಳು ತುಂಗಭದ್ರೆಯ ಜಲವನ್ನು ಹೊಕ್ಕಿದ್ದರು. ಬಿಷ್ಟಪ್ಪಯ್ಯನವರು ದೇವತೆಗಳಿಗೆ ನೆಲೆಕಲ್ಪಿಸಿದರು. ಹಂಪೆಯ ವಿರೂಪಾಕ್ಷನ ಮುಂದಿನ ರಾಜ ಗೋಪುರವನ್ನುಇವರು ಕಟ್ಟಿಸಿದರು. ಇವರು ನಾಲ್ಕು ಅವತಾರವನ್ನು ಎತ್ತಿದರೆಂದೂ ಶಂಕರಲಿಂಗ ಭಗವಾನರೇ ನಾಲ್ಕನೇ ಅವತಾರವೆಂದೂ ನಂಬಿಕೆ ಇದೆ.