ಮೇಲ್ಕೋಟೆ ಅಷ್ಟತೀರ್ಥ ಉತ್ಸವ

ಹತ್ತು ದಿನಗಳ ಈ ಉತ್ಸವದಲ್ಲಿ ಪ್ರತಿದಿನವೂ ಒಂದೊಂದು ತೀರ್ಥಕ್ಕೆ ಶ್ರೀಯವರ ಪಾದುಕೆ ಬಿಜಯ ಮಾಡಿಸುತ್ತಾರೆ. ನಾಲ್ಕನೆ ದಿನ ರಾಜಮುಡಿಯನ್ನು ಸ್ವಾಮಿಗೆ ಧಾರಣೆ ಮಾಡುತ್ತಾರೆ. ಇದರಲ್ಲಿ ಧ್ವಜಾರೋಹಣ, ತೇರು ಕಳ್ಳರ ಸುಲಿಗೆ, ತೀರ್ಥಸ್ನಾನ ಎಲ್ಲವೂ ನಡೆದು ರಾತ್ರಿವೇಳೆಯಲ್ಲಿ ವಾಹನಗಳು ನಡೆದುಪಡಿಯೇತ್ತ’ ಜರುಗುತ್ತದೆ. ಜಾತ್ರೆಯನ್ನು ರಾಜ ಒಡೆಯರ್ ರವರು ಪ್ರಾರಂಭಿಸಿದ್ದು.  ರಾಜಮುಡಿ, ಗಂಡುಭೇರುಂಡ ಪದಕ ಹಾಗೂ ಪದ್ಮಪೀಠ ಉತ್ಸವದಲ್ಲಿ ಗಮನ ಸೆಳೆಯುತ್ತದೆ. ಇಲ್ಲಿ ಅಷ್ಟತೀರ್ಥ ಉತ್ಸವವನ್ನು ಮುಂತಾದವನ್ನು ಏರ್ಪಡಿಸಿರುತ್ತಾರೆ. ಇದು ರಾಜಮುಡಿ ಜಾತ್ರೆ ಎಂದು ಪ್ರಸಿದ್ಧವಾಗಿದೆ.