ಸರ್ವತ್ರ/ಪ್ರಥಮ ಏಕಾದಶಿ

ಶಯನಿ ಏಕಾದಶಿ, ಮಹಾ ಏಕಾದಶಿ, ಪ್ರಥಮ ಏಕಾದಶಿ, ಪದ್ಮ ಏಕಾದಶಿ, ದೇವಶಯನಿ  ಏಕಾದಶಿ, ದೇವಪೋಢಿ ಏಕಾದಶಿ ಎಂಬ ಹೆಸರುಗಳಿಂದ ಕರೆಯಲಾಗುವ ಈ ದಿನವು  ಹಿಂದೂ ತಿಂಗಳು ಆಷಾಢ (ಜೂನ್ - ಜುಲೈ)  ಶುಕ್ಲ ಪಕ್ಷದ   ಹನ್ನೊಂದನೇ  ದಿನ (ಏಕಾದಶಿ). ಆದ್ದರಿಂದ ಇದನ್ನು ಆಷಾಢ ಏಕಾದಶಿ ಅಥವಾ ಆಷಾಢಿ  ಎಂದೂ ಕರೆಯಲಾಗುತ್ತದೆ. ಇದನ್ನು ತೆಲುಗು ಭಾಷೆಯಲ್ಲಿ  ತೊಲಿ ಏಕಾದಶಿ ಎಂದು ಕರೆಯುತ್ತಾರೆ.  ಈ ಪವಿತ್ರ ದಿನವು ಸ್ಥಿತಿಕರ್ತ ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ.   ಈ ದಿನ ವಿಷ್ಣು ಮತ್ತು ಲಕ್ಷ್ಮಿ  ಇವರ ಪೂಜೆ ಮಾಡಲಾಗುತ್ತದೆ. ಇಡೀ ರಾತ್ರಿಯನ್ನು  ಪ್ರಾರ್ಥನೆ ಹಾಗೂ ಭಜನೆಗಳಲ್ಲಿ  ಕಳೆಯುತ್ತಾರೆ.  ಭಕ್ತರು  ಉಪವಾಸವಿದ್ದು, ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ಆಚರಿಸಬೇಕಾದ ವ್ರತಗಳನ್ನು ಈ ದಿನ ಇಟ್ಟುಕೊಳ್ಳುತ್ತಾರೆ. ಇದು ಯಾವುದಾದರು ಆಹಾರ ಪದಾರ್ಥವನ್ನು ತ್ಯಜಿಸುವ ಅಥವಾ ಪ್ರತಿ ಏಕಾದಶಿ ದಿನ ಉಪವಾಸವನ್ನು ಆಚರಿಸುವುದರ ನಿಮಿತ್ತ ಆಗಿರುತ್ತದೆ. ಈ ದಿನ ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಮಲಗಿ ನಿದ್ದೆ ಮಾಡುತ್ತಾನೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ  ಎಂದು  ಕರೆಯಲಾಗುತ್ತದೆ. ವಿಷ್ಣುವು ನಾಲ್ಕು ತಿಂಗಳ ನಂತರ  ಬರುವ ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆಯಿಂದ ಎಚ್ಚತ್ತುಕೊಳ್ಳುತ್ತಾನೆ.   ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯುತ್ತಾರೆ.  ಈ ಹೊತ್ತಿಗೆ ಮಳೆಗಾಲ  ಇರುತ್ತದೆ. ಹೀಗಾಗಿ, ಶಯನಿ ಏಕಾದಶಿಯು ಚಾತುರ್ಮಾಸದ  ಆರಂಭ.  ಭಕ್ತರು ವಿಷ್ಣುವಿನ  ಪ್ರೀತ್ಯರ್ಥ ಚಾತುರ್ಮಾಸ ವ್ರತವನ್ನು ಆಚರಿಸಲು   ಈ ದಿನ  ಆರಂಭಿಸುತ್ತರೆ. ಈ ದಿನ ಉಪವಾಸವನ್ನು   ಆಚರಿಸಲಾಗುತ್ತದೆ. ಈ ಉಪವಾಸದಲ್ಲಿ  ಕೆಲವು ಅಹಾರ ಪದಾರ್ಥಗಳನ್ನು ಸೇವಿಸುವದಿಲ್ಲ. 

ಮಹತ್ವ

ಭವಿಷ್ಯೋತ್ತರಪುರಾಣ ಗ್ರಂಥದಲ್ಲಿ ದೇವ ಕೃಷ್ಣನು ಈ ದಿನದ ಮಹತ್ವವನ್ನು  ಯುಧಿಷ್ಠಿರನಿಗೆ, ಸೃಷ್ಟಿಕರ್ತ-ದೇವರ ಬ್ರಹ್ಮನು ತನ್ನ ಮಗ ನಾರದನಿಗೆ ಹೇಳಿದಂತೆ,   ವಿವರಿಸಿದ್ದಾನೆ.

ಈ ದಿನ  ಭಕ್ತರ  ಯಾತ್ರೆಯು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ  ಪಂಢರಪುರದಲ್ಲಿ ಕೊನೆಗೊಳ್ಳುತ್ತದೆ.  ಪಂಢರಪುರವು ವಿಷ್ಣುವಿನ ರೂಪವಾದ ವಿಠ್ಠಲನ ಆರಾಧನೆಯ ಕೇಂದ್ರವಾಗಿದ್ದು ಚಂದ್ರಭಾಗಾ ನದಿಯ ದಂಡೆಯಮೇಲಿದೆ.  ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈ ದಿನ ಇಲ್ಲಿಗೆ ಬರುತ್ತಾರೆ.