ಕಾರ ಹುಣ್ಣಿಮೆ


ಜ್ಯೇಷ್ಠ ಮಾಸದ ಹುಣ್ಣಿಮೆ. ಅಚಲವಾದ ಪತಿನಿಷ್ಟೆಯಿಂದ ಕಾಲಮೃತ್ಯುವನ್ನು ಗೆದ್ದ ಮಹೋತ್ಸವದ ದಿನ. ಹೆಣ್ಣು ಮಕ್ಕಳಿಗೆ ಇದು ಮುಖ್ಯವಾದ ಹಬ್ಬ. ಸಾವಿತ್ರಿ ಸೌಭಾಗ್ಯವನ್ನು ಪಡೆದ ದಿನ. ಇಂದು ಆಲದ ಮರಕ್ಕೆ ಪೂಜೆ ಸಲ್ಲಿಸಬೇಕೆಂದು ವಿಧಿ. ಕೆಲವರು ಉಪವಾಸವನ್ನು ಮಾಡಿ ಮಾರನೆಯ ದಿನ ಪಾರಣೆ ಮಾಡುತ್ತಾರೆ.. ಮೃಗಶಿರ ಮಾಸ ಪ್ರವೇಶಿಸುತ್ತಿದ್ದಂತೆ ಬರುವ ರೈತರ ಪ್ರಥಮ ಹಬ್ಬ ಕಾರ ಹುಣ್ಣಿಮೆ ಮೂಲಕ, ಅನ್ನದಾತರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುವುದಕ್ಕೆ ಮುನ್ನ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಮೂಲಕ ತಮ್ಮ ರಾಸುಗಳಿಗೆ ಅದ್ಧೂರಿಯಾಗಿ ಸಿಂಗರಿಸಿ ಎಂದು ನೀಡದ ಭೋೕಜನವನ್ನು,ಫಲ ತಾಂಬೂಲವನ್ನು ನೀಡುತ್ತಾರೆ.

ಅಷ್ಟೇ ಅಲ್ಲದೆ ಈ ದಿನದ ಅತ್ಯಂತ ಶಾಖಾಹಾರಿಯಾದ ಬಸವಣ್ಣ(ಎತ್ತುಗಳು)ನಿಗೆ ಹಸಿ ಮೊಟ್ಟೆಯನ್ನು ಇನ್ನಿತರ ವಸ್ತುಗಳಿರುವ ಗೊಟ್ಟವನ್ನು ಬಿದಿರುವ ಕೊಂಚಿನ ಮೂಲಕ ಎತ್ತುಗಳಿಗೆ ಗೊಟ್ಟ ಹಾಕುತ್ತಾರೆ. ಇದರಿಂದ ಮೃಗಶಿರ ಮಾಸದಿಂದ ಬದಲಾಗುವ ವಾತಾವರಣದಿಂದ ತಮ್ಮ ರಾಸುಗಳಿಗೆ ಎನೂ ತೊಂದರೆಯಾಗದಿರಲಿ ಎನ್ನುವ ನಂಬಿಕೆ ರೈತರಲ್ಲಿದೆ.