ಶಿರಸಂಗಿ ಕಾಳಿಕಾ ಜಾತ್ರೆ

ಶಿರಸಂಗಿ ಗ್ರಾಮವು ಪೌರಾಣಿಕ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಸವದತ್ತಿ ಎಂದಾಕ್ಷ ಣ ಎಲ್ಲಮ್ಮನ ಕ್ಷೇತ್ರ ನೆನಪಾಗುವುದು ಸ್ವಾಭಾವಿಕ. ಹಾಗೆಯೇ ಸವದತ್ತಿಯಿಂದ ಕೇವಲ 23 ಕಿ.ಮೀ. ದೂರದಲ್ಲಿರುವ ಶಿರಸಂಗಿಯ ಕಾಳಿಕಾ ದೇವಿ ದೇವಸ್ಥಾನವು ರಾಜ್ಯದ ಪ್ರಮುಖ ಶಕ್ತಿ ಕ್ಷೇತ್ರಗಳಲ್ಲಿ ಒಂದಾಗಿದೆ.

ಪುರಾತನ ಕಾಲದಲ್ಲಿ ಮುನಿಗಳಾದ ಋುಷ್ಯಶೃಂಗನಿಗೆ ಜಮದಗ್ನಿ, ಭಾರ್ಗವ ಇತ್ಯಾದಿ ಋುಷಿಗಳು ಸತ್ಕರಿಸಿ ಗೌರವಿಸುತ್ತಾರೆ. ಅವರ ಬಿನ್ನಹಕ್ಕೆ ಮನಿದ ಋುಷ್ಯಶೃಂಗನು ಈಗಿನ ಶಿರಸಂಗಿ ಪ್ರದೇಶದಲ್ಲಿ 10 ವರ್ಷಗಳ  ಕಾಲ ಕಠೋರ ತಪಸ್ಸು ಆಚರಿಸಿದರು. ಈ ಮುನಿಗಳ ಯಜ್ಞಯಾಗಗಳನ್ನು ಕೆಡಿಸಲು ಐವರು ರಾಕ್ಷ ಸರು ನಲುಂದಾಸುರ (ನವಲಗುಂದ), ನರುಂದಾಸುರ (ನರಗುಂದ), ಹಿರಿಕುಂಬಾಸುರ (ಹಿರೇಕುಂಬಿ), ಚಿಕ್ಕುಂಬಾಸುರ (ಚಿಕ್ಕುಂಬಿ) ಹಾಗೂ ಬೆಟ್ಟಾಸುರ (ಬೆಟಸೂರ) ಕಂಟಕರಾದರು. ಋುಷ್ಯಶೃಂಗ ಮುನಿಯ ಪ್ರಾರ್ಥನೆಯ ಮೇರೆಗೆ ಹಾಗೂ ಆತನ ತಪಸ್ಸನ್ನು ಮೆಚ್ಚಿ ಕಾಳಿಕಾ ರೂಪದಿಂದ ಪ್ರತ್ಯಕ್ಷ ಳಾಗಿ, ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದ ಕ್ರೂರ ರಾಕ್ಷ ಸರನ್ನು ಸಂಹರಿಸುತ್ತಾಳೆ. ನಂತರ ಋುಷ್ಯಶೃಂಗನ ಬಿನ್ನಹದ ಮೇರೆಗೆ ಅದೇ ರೂಪದಲ್ಲಿ ಆ ಸ್ಥಳದಲ್ಲಿ ಸ್ಥಿರವಾಗಿ ನೆಲೆಸಿದಳೆಂಬುದು ಪೌರಾಣಿಕ ಐತಿಹ್ಯ. ರಾಮ-ಲಕ್ಷ್ಮಣರು ಇಲ್ಲಿಗೆ ಭೇಟಿ ನೀಡಿದ್ದರು. ಎನ್ನಲಾದ ಮಾಹಿತಿ ಕ್ರಿ.ಶ.1148ರಲ್ಲಿ ಕಲ್ಯಾಣ ಚಾಲುಕ್ಯ ಅರಸು ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ಎಂದು ಕಾಳಿಕಾ ದೇವಸ್ಥಾನದ ಬಳಿ ದೊರೆತ ಶಿಲಾಶಾಸನದಿಂದ ತಿಳಿದು ಬರುತ್ತದೆ.

ಪುರಾತತ್ವ ಇಲಾಖೆಯ ಪ್ರಕಾರ ಕ್ರಿ.ಶ.1ನೆಯ ಶತಮಾನದಲ್ಲಿ ಕಾಳಿಕಾ ದೇವಸ್ಥಾನ ನಿರ್ಮಾಣಗೊಂಡಿರುತ್ತದೆ. ಈ ದೇವಾಲಯವನ್ನು ಹೇಮಾಡನೆಂಬುವನು ಕಟ್ಟಿದ್ದು, ದೇವಿಯ ಗರ್ಭಗುಡಿಯು ಬೇರೆಯಾಗಿದ್ದು ಮಂಟಪವು ದೊಡ್ಡದಿದೆ ಕಾಳಿಕಾದೇವಿಯ ಮೂರ್ತಿಯು ಸಾಲಿಗ್ರಾಮ ಶಿಲೆಯಾಗಿದ್ದು, ಕುಳಿತ ಭಂಗಿಯಲ್ಲಿ ಒಂದು ಆಳು ಎತ್ತರ ಪ್ರಮಾಣದಲ್ಲಿದ್ದು, ಸುವರ್ಣಾಂಕಿತ ರೇಷೆಗಳಿಂದ ಕೂಡಿದೆ. ಕಾಳಿಕಾದೇವಿಯ ಎದುರಿನಲ್ಲಿ ದೇವಿಗೆ ಆಭಿಮುಖವಾಗಿ ಕಾಲಭೈರವ ದೇವಾಲಯವಿದೆ. ಈ ದೇವಾಲಯವನ್ನು ಕ್ರಿ.ಶ.11ನೆಯ ಶತಮಾನದಲ್ಲಿ ಚಾಲುಕ್ಯ ಅರಸರ ಮಾಂಡಲಿಕನಾಗಿದ್ದ ಹೆಬ್ಬೆಯ ನಾಯಕನು ಕಟ್ಟಿಸಿದನು. ಕಾಳಿಕಾ ದೇವಸ್ಥಾನದ ಬದಿಯಲ್ಲಿ ಕಮಠೇಶ್ವರ ಹಾಗೂ ಭೈರವೇಶ್ವರ ದೇವಾಲಯಗಳಿವೆ. ಕಮಠೇಶ್ವರ ದೇವಾಲಯದ ಮುಂಭಾಗದಲ್ಲಿ ಬ್ರಹ್ಮದೇವರ ವೇದಿಕೆಯಿದೆ. ಕಾಳಿಕಾ ದೇವಸ್ಥಾನದ ಪೂರ್ವಾಭಿಮುಖವಾಗಿರುವ ಮಹಾದ್ವಾರ ದಾಟಿದ ಕೂಡಲೇ ಒಳಗೆ ಎಡಬದಿಗೆ, ಬುತ್ತಿ ಹಾರಿಸುವ ವೇದಿಕೆ ಇದೆ.

ಕಾಳಿಕಾ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಎಡಬದಿಗೆ ಬನ್ನಿ ಮಹಾಂಕಾಳಿ ಎಂಬ ಹೆಸರಿನ ಚಿಕ್ಕ ಗುಡಿಯಿದೆ. ಶ್ರೀ ಕಾಳಿಕಾದೇವಿಯ ಪಲ್ಲಕ್ಕಿಯು ಇಲ್ಲಿಯವರೆಗೂ ಬಂದು ಹೋಗುವ ಸಂಪ್ರದಾಯವಿದೆ. ಇದಕ್ಕೆ ಕಾಳಿಕಾ ಪಾದಗಟ್ಟೆ ಎನ್ನುವರು. ಕಾಳಿಕಾ ದೇವಸ್ಥಾನದಿಂದ ತುಸು ದೂರದಲ್ಲಿ ಭೀಮರಥಿ ಹೊಂಡವಿದೆ. ಇದರ ಬದಿಗೆ ಖಡ್ಗತೀರ್ಥ ಎಂಬ ಮತ್ತೊಂದು ಹೊಂಡವಿದೆ.ಚೈತ್ರ ಶುದ್ಧ ತದಿಗೆಯಂದು ಇಲ್ಲಿ ವಿಶೇಷವಾಗಿ ರಥೋತ್ಸವವು ನಡೆಯುವುದು.