ಮೇಲ್ಕೋಟೆ ದೇವರ ಅಷ್ಟತೀರ್ಥೋತ್ಸವ

ಇದು ಹತ್ತು ದಿನಗಳ ಉತ್ಸವ. ಪ್ರತಿದಿನವೂ ಒಂದೊಂದು ತೀರ್ಥಕ್ಕೆ ಶ್ರೀಯವರ ಪಾದುಕೆ ಬಿಜಯ ಮಾಡಿಸುತ್ತಾರೆ. ನಾಲ್ಕನೆಯ  ದಿನ ರಾಜಮುಡಿಯನ್ನು ಸ್ವಾಮಿಗೆ ಧಾರಣೆ ಮಾಡುತ್ತಾರೆ. ಇದರಲ್ಲಿ ಧ್ವಜಾರೋಹಣ, ತೇರು ಕಳ್ಳರ ಸುಲಿಗೆ, ತೀರ್ಥಸ್ನಾನ ಎಲ್ಲವೂ ರಾತ್ರಿವೇಳೆಯಲ್ಲಿ ಜರುಗುತ್ತದೆ. ಈ ಜಾತ್ರೆಯನ್ನು ರಾಜ ಒಡೆಯರ್ ರವರು ಪ್ರಾರಂಭಿಸಿದ್ದು. ರಾಜ ಒಡೆಯರ್ ರವರು ರಾಜಮುಡಿ, ಗಂಡುಭೇರುಂಡ ಪದಕ, ಪದ್ಮಪೀಠವನ್ನು ಅರ್ಪಿಸಿ ಅಷ್ಟತೀರ್ಥ ಉತ್ಸವ ಮುಂತಾದವನ್ನು ಏರ್ಪಡಿಸುತ್ತಿದ್ದರು.