ಶಂಕರ ಜಯಂತಿ

ಶಂಕರಾಚಾರ್ಯ ಜಯಂತಿ- ಮಹತ್ವ ಮತ್ತು ಆಚರಣೆ

ಸನಾತನ ಧರ್ಮದಲ್ಲಿ ಅತ್ಯಂತ ಮಹತ್ವದ ಆಚರಣೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಶಂಕರ ಅಥವಾ ಶಂಕರಾಚಾರ್ಯ ಜಯಂತಿಯು ಆದಿ ಶಂಕರರ (8ನೇ ಶತಮಾನದ ಭಾರತೀಯ ತತ್ವಜ್ಞಾನಿ ಮತ್ತು ಧರ್ಮಶಾಸ್ತ್ರಜ್ಞ) ಜನ್ಮದಿನವನ್ನು ಸೂಚಿಸುತ್ತದೆ. ಜಗದ್ಗುರು ಶಂಕರ ಭಗವತ್ಪಾದರು ಎಂದೂ ಕರೆಯಲ್ಪಡುವ ಇವರು ವೈದಿಕ ಜ್ಞಾನವನ್ನು ಬೋಧಿಸಿ, ಹಿಂದೂ ಧರ್ಮದ ಬೆಳವಣಿಗೆಯ ಮೇಲೆ ಪ್ರಭಾವ ಬೀರುವಂತಹ ‘ಅದ್ವೈತ ಸಿದ್ಧಾಂತ’ವನ್ನು ವಿವರಿಸಿದರು.

ಹಿಂದೂ ಪಂಚಾಂಗದ ಪ್ರಕಾರ, ವೈಶಾಖ ಮಾಸದಲ್ಲಿ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಶಂಕರ ಜಯಂತಿಯನ್ನು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಈ ದಿನವು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರುತ್ತದೆ.

ಶ್ರೀ ಆದಿ ಶಂಕರರು

ಶ್ರೀ ಆದಿ ಶಂಕರರು ಹಿಂದೂ ಧರ್ಮದ ಶ್ರೇಷ್ಠ ಗುರು ಮತ್ತು ದಾರ್ಶನಿಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಇವರು ವೈದಿಕ ಧರ್ಮದ ಸಾವಿರ ಮತ್ತು ಅದ್ವೈತ ವೇದಾಂತದ ವಿಖ್ಯಾತರೆಂದು ಪ್ರಸಿದ್ಧ. ಆತ್ಮ, ಪರಮಾತ್ಮ, ವೈರಾಗ್ಯ ಮತ್ತು ಮೋಕ್ಷ ಎಂಬ ಪರಿಕಲ್ಪನೆಯನ್ನು ವಿವರಿಸಿದರು. ಹಿಂದೂ ಸಂಸ್ಕೃತಿಯ ಅವನತಿಯ ಕಾಲದಲ್ಲಿ ಅವರ ಬೋಧನೆಗಳು ಹಿಂದು ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಯಿತು. ತತ್ವಜ್ಞಾನಿಗಳಾದ ಮಧ್ವ ಮತ್ತು ರಾಮಾನುಜರ ಜೊತೆಗೆ ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪುನರ್ ವಿಮರ್ಶಿಸಿದರು ಎಂದು ಹೇಳಲಾಗುತ್ತದೆ.

ಶಂಕರ ಜಯಂತಿ ಆಚರಣೆ

ಈ ದಿನವನ್ನು ದೇಶಾದ್ಯಂತ ಶಂಕರ ಮಠಗಳಲ್ಲಿ ಸಂಭ್ರಮದಿಂದ ಶಂಕರ ಜಯಂತಿ ಆಚರಿಸಲಾಗುತ್ತದೆ. ಶೃಂಗೇರಿ ಶಾರದಾ ಪೀಠ, ಕಾಲಟಿ ಹಾಗೂ ಕಂಚಿ ಮಠಗಳಲ್ಲಿ ಹವನ, ಪೂಜೆ, ಸತ್ಸಂಗಗಳನ್ನು ಭಾರತದಾ ದ್ಯಂತ ಹಾಗೂ ಜಾಗತಿಕ ಮಟ್ಟದಲ್ಲಿ ಆಯೋಜಿಸಲಾಗುತ್ತದೆ.    ಈ ದಿನದಂದು ಸನಾತನ ಧರ್ಮದ ಬಗ್ಗೆ ಚರ್ಚೆ, ಭಾಷಣಗಳು ನಡೆಯುತ್ತವೆ.

ಶಂಕರ ಜಯಂತಿ ಮಹತ್ವ

ಶಂಕರರು ಹಿಂದೂ ಧರ್ಮಗ್ರಂಥಗಳಾದ ಉಪನಿಷತ್ತುಗಳು, ಭಗವದ್ಗೀತೆ, ಬ್ರಹ್ಮಸೂತ್ರಗಳ ಮೂಲ ತತ್ವಗಳನ್ನು ವಿವರಿಸಿ ಪುನರ್ ವ್ಯಾಖ್ಯಾನಿಸಿದರು. ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಅವರು ದೇಶಾದ್ಯಂತ ಪ್ರವಾಸ ಮಾಡಿದರು. ಭಾರತದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು. ದಕ್ಷಿಣದಲ್ಲಿ ಶೃಂಗೇರಿ, ಉತ್ತರದಲ್ಲಿ ಬದರಿ, ಪೂರ್ವಕ್ಕೆ ಪುರಿ ಮತ್ತು ಪಶ್ಚಿಮದಲ್ಲಿ ದ್ವಾರಕೆ.

ಶಂಕರನು ಕ್ರಿ.ಶ. 788 ರಲ್ಲಿ ಕಾಲಟಿಯಲ್ಲಿ ವಿನಯವಂತ ನಂಬೂದಿರಿ ಬ್ರಾಹ್ಮಣ ದಂಪತಿಗಳಿಗೆ ಜನಿಸಿದರು.

ಕೇವಲ 32 ವರ್ಷಗಳ ಅವರ ಅಲ್ಪಾವಧಿಯಲ್ಲಿ ಶಂಕರರು ಭಾರತೀಯ ತತ್ವಶಾಸ್ತ್ರವನ್ನು ಪುನರುಜ್ಜೀವನಗೊಳಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದರು.