ಆಮಲಕಿ ಏಕಾದಶಿ

ಆಮಲಕಿ ಏಕಾದಶಿ ಅಥವಾ ಅಮಾಲಕಿ ಏಕಾದಶಿಯು ಹಿಂದೂ ಪವಿತ್ರ ದಿನವಾಗಿದ್ದು, ಇದು ಫಾಲ್ಗುಣ ಮಾಸದ (ಫೆಬ್ರವರಿ-ಮಾರ್ಚ್) ಚಾಂದ್ರಮಾನ ಮಾಸದಲ್ಲಿ ನಡೆಯುವ ಹುಣ್ಣಿಮೆಯ 11ನೇ ದಿನ (ಏಕಾದಶಿ) ಆಚರಿಸಲಾಗುತ್ತದೆ. ಇದು ಭಾರತೀಯ ನೆಲ್ಲಿಕಾಯಿಗೆ ಸಂಬಂಧಿಸಿದ ಒಂದು ಹಬ್ಬ.

ಏಕಾದಶಿಯ ದೇವರು ವಿಷ್ಣು ದೇವರು ನೆಲ್ಲಿವೃಕ್ಷದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ದಿನದಂದು ನೆಲ್ಲಿಕಾಯಿ ಮರವನ್ನು ದೇವರ ಕೃಪೆಗಾಗಿ ಪೂಜಿಸಲಾಗುತ್ತದೆ.

ಮಹತ್ವ

ವೃಕ್ಷಪೂಜೆ ಹಿಂದೂ ಧರ್ಮದ ಅವಿಭಾಜ್ಯ ಅಂಗ, ಸರ್ವವ್ಯಾಪಿ ದೇವರು ಎಲ್ಲದರಲ್ಲೂ ಜೀವಿಸುತ್ತಾರೆ ಎಂದು ನಂಬುತ್ತಾರೆ.

ವಿಶೇಷವಾಗಿ ನೆಲ್ಲಿಕಾಯಿ ಮರದ ಮೇಲೆ ವಿಷ್ಣು ದೇವರಿರುವ ನಂಬಿಕೆ. ಕೆಲವು ಸಂಪ್ರದಾಯಗಳಲ್ಲಿ, ಸಂಪತ್ತಿನ ದೇವತೆಯಾದ ಅವನ ಪತ್ನಿ ಲಕ್ಷ್ಮಿಯು ವೃಕ್ಷದಲ್ಲಿ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ. ವಿಷ್ಣುವಿನ ಅವತಾರ ಕೃಷ್ಣ ಮತ್ತು ಆತನ ಪತ್ನಿ ರಾಧಾ ಮರದ ಬಳಿ ವಾಸವಾಗಿರಬಹುದೆಂದು ನಂಬಲಾಗಿದೆ.

ವಿಧಿಗಳು

ಬೆಳಗ್ಗೆ ಸ್ನಾನ ಮಾಡಬೇಕು. ಮರಕ್ಕೆ ಪೂಜೆ ಸಲ್ಲಿಸಿ, ನಂತರ ದೇವರಿಗೆ ಪೂಜೆ ಸಲ್ಲಿಸಬೇಕು. ಸಮೃದ್ಧಿ, ಸಂಪತ್ತು ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಬ್ರಾಹ್ಮಣ ಪುರೋಹಿತರಿಗೆ ಭಕ್ತರು ಕಾಣಿಕೆಗಳನ್ನು ಅರ್ಪಿಸುತ್ತಾರೆ. ದಿನದಂದು ಆಹಾರ ಮತ್ತು ದಾನವನ್ನು ಮಾಡಬೇಕು. ಈ ಆಚರಣೆ ವಾಜಪೇಯ ಹಾಗೂ ಸೋಮಯಜ್ಞ ಯಜ್ಞದ ಸಾಧನೆಗೂ ಸಮನಾದ ಗುಣವಿದೆ ಎಂದು ನಂಬಲಾಗಿದೆ.