ಸಾಗರ ಕಟ್ಟೆ ಪ್ರದ್ಯುಮ್ನ ತೀರ್ಥರ ಆರಾಧನೆ

ಸಾಗರಕಟ್ಟೆ  ಕಿರಿಯ ಮಧ್ವಮಠಗಳಲ್ಲಿ ಮಖ್ಯವಾದದ್ದು, ಮೈಸೂರಿನ ಸಮೀಪ  ಇರುವ  ಇಲ್ಲಿನ ಪರಂಪರೆ ಶುರುವಾಗಿದ್ದೇ ಪ್ರದ್ಯುಮ್ನ ತೀರ್ಥರಿಂದ. ಧಾರವಾಡದ ಮೇರು ವಿದ್ವಾಂಸರಾದ  ಪಂಡಿತ ವೆಂಕಟಾಚಾರ್ಯ ಪುತ್ರರಾದ  ಅವರು ಮುಳಬಾಗಿಲಿನ ಶ್ರೀ ವೇದನಿಧಿ ತೀರ್ಥರ ಬಳಿ ವೇದ-ಉಪನಿಷತ್‍ಗಳನ್ನು ಕಲಿತರು. ಕುಂದಾಪುರದ ವ್ಯಾಸರಾಯರ ಮಠದ 1008  ಲಕ್ಷ್ಮಿಪ್ರಿಯ ತೀರ್ಥರಿಂದ  ಸಂನ್ಯಾಸ ದೀಕ್ಷೆಯನ್ನು ಪಡೆದ ಅವರು  1008 ಶ್ರೀ ಶ್ರೀ  ಪ್ರದ್ಯುಮ್ನ ತೀರ್ಥ  ಎಂಬ ಅಭಿದಾನದೊಂದಿಗೆ ಸಾಗರಕಟ್ಟೆಯಲ್ಲಿ ಮಧ್ವಮಠವನ್ನು ಸ್ಥಾಪನೆ ಮಾಡಿದರು. ಅನೇಕ ರೀತಿಯಲ್ಲಿ ಮಠವನ್ನು ಪ್ರಗತಿಯ ಕಡೆಗೆ ತೆಗೆದು ಕೊಂಡು ಹೋದ  ಅವರು ತತ್ವಶಾಸ್ತ್ರದಲ್ಲಿ ಮಹಾ ವಿದ್ವಾಂಸರು ಎನ್ನಿಸಿ ಕೊಂಡಿದ್ದರು. ಸುದೀರ್ಘ ಕಾಲ ಪೀಠದಲ್ಲಿ ಇದ್ದ  ಅವರು  ರಾಕ್ಷಸ ಸಂವತ್ಸರದ ಜ್ಯೇಷ್ಠ  ಅಮಾವಾಸ್ಯೆಯಂದು ಬೃಂದಾವನಸ್ಥರಾದರು. ಅವರ  ಆರಾಧನೆಯನ್ನು ಭಕ್ತಿ ಶ್ರದ್ಧೆಗಳಿಂದ  ಆಚರಿಸಿ ಕೊಂಡು ಬರಲಾಗುತ್ತಿದೆ.