ಸದ್ಗರು ಶಂಕರ ಲಿಂಗ ಭಗವಾನರ ಆರಾಧನೆ

ಮಧ್ಯ ಕರ್ನಾಟಕದ ಪ್ರಮುಖ ಅವಧೂತರಾದ ಶಂಕರ ಲಿಂಗ ಭಗವಾನರು ಜನಿಸಿದ್ದು ವಿಕ್ರಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆಯಂದು (ಕ್ರಿ. 1880 ಆಗಸ್ಟ್ 21ರಂದು). ತಂದೆ ಕೃಷ್ಣಪ್ಪ ಮತ್ತು ತಾಯಿ ಸುಬ್ಬಮ್ಮ. ಅವರ ಜನ್ಮನಾಮ ರಂಗಪ್ಪ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ರಂಗಪ್ಪನವರು ಕಷ್ಡದಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡರು. ಅಧ್ಯಾತ್ಮದಕಡೆಗೆ ಸೆಳೆತ ಅವರಿಗೆ ಚಿಕ್ಕಂದಿನಿಂದಲೇ ಬಂದಿತು. ಹಿತೈಷಿಗಳಾದ ತುಂಬಗೆರೆ ಬ್ರಹ್ಮಾನಂದರ ಶಿಷ್ಯರಾದ ಎಲ್ಲ ಪ್ಪಜ್ಜನವರು ಮಹಾವಾಕ್ಯವನ್ನು ಉಪದೇಶಿಸಿದರು. ಪಾರ್ವತಮ್ಮನವರನ್ನು ವಿವಾಹವಾಗಿ ಶ್ಯಾನುಭೋಗರಾಗಿ ಲೌಕಿಕ ಜೀವನನ್ನು ನಡೆಸಿದರೂ ಅವರ ಮನಸ್ಸು ಅಧ್ಯಾತ್ಮದಲ್ಲಿಯೇ ಇತ್ತು. ಅಗಡಿಯ ಶಂಕರಭಗವಾನರು ಮತ್ತು ಬನವಾಸಿಯ ದತ್ತ ರಾಜಯೋಗೀಂದ್ರರ ಅನುಗ್ರಹವು ಅವರಿಗೆ ದೊರಕಿತು. ಗುರುಪಂಥ, ದತ್ತಪಂಥ ಮತ್ತು ದೇವಿಪಂಥ ಮೂರರಲ್ಲಿಯೂ ಪ್ರವೇಶವಿದ್ದ ಅವರು ಎಲ್ಲ ದರಸಾರವನ್ನು ಗ್ರಹಿಸಿ ಉಪದೇಶ ಮಾಡಿದರು. ದಕ್ಷಿಣ ಭಾರತವನ್ನುಸಂಚಾರ ಮಾಡಿ ತಮ್ಮ ವಿಚಾರಗಳನ್ನು ಪ್ರಚಾರ ಮಾಡಿದರು. ಶೃಂಗೇರಿಯ ಜಗದ್ಗುರುಗಳಾದ ಚಂದ್ರಶೇಖರ ಭಾರತಿಗಳಿಂದ ಸಂನ್ಯಾಸವನ್ನು ಸ್ವೀಕರಿಸಿ ಸದ್ಗುರು ಶಂಕರ ಲಿಂಗ ಭಗವಾನ್ಸರ ಸ್ವತಿಗಳು ಎಂಬ ಅಭಿದಾನವನ್ನು ಪಡೆದರು. ನುಲೇನೂರು, ಮಾಳೇನಹಳ್ಳಿ, ಲೋಕಿಕೆರೆ ಮತ್ತು ಕೊಮಾರನಹಳ್ಳಿಗಳಲ್ಲಿ ಆಶ್ರಮವನ್ನು ಸ್ಥಾಪನೆ ಮಾಡಿದರು. ಫಾಲ್ಗಣ ಶುದ್ಧ ತದಿಗೆಯಂದು (1953 ಫೆಬ್ರವರಿ 16ರಂದು) ದೇಹತ್ಯಾಗ ಮಾಡಿದರು. ಅವರ ಸಮಾದಿ ಕೊಮಾರನಹಳ್ಳಿಯಲ್ಲಿ ಇದೆ. ತಮ್ಮ ಚಿಂತನೆಗಳಿಂದ ಜೀವಿತ ಕಾಲದಲ್ಲಿ ಲಕ್ಷಾಂತರ ಭಕ್ತರನ್ನು ಪಡೆದಿದ್ದ ಅವರ ಅನುಯಾಯಿಗಳು ಈಗ ಮಧ್ಯ ಕರ್ನಾಟಕದ ಎಲ್ಲಾಭಾಗದಲ್ಲಿಯೂ ಇದ್ದು ಅವರ ಆರಾಧನಾ ಮಹೋತ್ಸವವು ಪ್ರತಿವರ್ಷ ಮಾಘ ಬಹುಳ ಏಕಾದಶಿಯಿಂದ ಫಾಲ್ಗುಣ ಶುದ್ದ ತದಿಗೆವರೆಗೆ ಕೊಮಾರನಹಳ್ಳಿಯಲ್ಲಿನಡೆಯಲಿದ್ದು ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.