ಶ್ರಾವಣ ಶನಿವಾರ

ಹಿಂದೂ ಪಂಚಾಂಗದ ಅತ್ಯಂತ ಪವಿತ್ರ ಮಾಸಗಳಲ್ಲಿ ಶ್ರಾವಣ ಮಾಸವೂ ಒಂದು. ಶ್ರಾವಣ ಮಾಸದಲ್ಲಿ ಶನಿವಾರ ಕೂಡ ಅಷ್ಟೇ ಮಹತ್ವಪೂರ್ಣ. ಈ ಪವಿತ್ರ ದಿನಗಳಲ್ಲಿ ಶ್ರಾವಣ ಮಾಸದ ಎಲ್ಲ ಶನಿವಾರ ವಿಷ್ಣು ಭಕ್ತರು ವೆಂಕಟರಮಣ ದೇವರ ಪ್ರೀತ್ಯರ್ಥವಾಗಿ ಬೇರೆ ಮನೆಗಳಿಗೆ ತೆರಳಿ ಛತ್ರ (ಭಿಕ್ಷೆ) ಬೇಡುತ್ತಾರೆ. ಬಂದಿರುವ ಭಿಕ್ಷೆಯಿಂದ ಆಹಾರ ಸ್ವೀಕರಿಸುತ್ತಾರೆ. ಅನೇಕ ಶ್ರದ್ಧಾವಂತ ಹಿಂದೂಗಳು ಶನಿ ದೇವರ ಆಶೀರ್ವಾದವನ್ನು ಪಡೆಯಲು ಶ್ರಾವಣ ಮಾಸವನ್ನು ಶನಿದೇವರ ಕೃಪೆಗಾಗಿ ಆಯ್ದುಕೊಳ್ಳುತ್ತಾರೆ.

ಪ್ರಾಮುಖ್ಯತೆ

ಶನಿ ದೇವರಿಗೆ ಅರ್ಪಿತವಾದ ವಿಶೇಷ ಪೂಜೆಗಳು ಮತ್ತು ಆಚರಣೆಗಳನ್ನು ತಿಂಗಳ ಶನಿವಾರಗಳಲ್ಲಿ ನಡೆಸಲಾಗುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಶನಿದೇವನು ತನ್ನ ಜೀವನದಲ್ಲಿ ಉಂಟಾಗುವ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಶಿವ ಹೊಂದಿದ್ದಾನೆ ಎಂದು ನಂಬಲಾಗಿದೆ.

ಶ್ರಾವಣ ಶನಿವಾರವನ್ನು ‘ಸಂಪತ್ ಶನಿವಾರ’ ಎಂದೂ ಕರೆಯುತ್ತಾರೆ, ಏಕೆಂದರೆ ಶನಿದೇವನು ವಿಶೇಷವಾಗಿ ಸಮೃದ್ಧಿ ಮತ್ತು ಐಶ್ವರ್ಯವನ್ನು ಭಕ್ತರಿಗೆ ಕರುಣಿಸುತ್ತಾನೆ ಎಂದು ವ್ಯಾಪಕವಾಗಿ ನಂಬಲಾಗಿದೆ.

ಆಚರಣೆ

ಶನಿ ಪೂಜೆ ಮಾಡುವವರು ಶನಿದೇವರಿಗೆ ಸಾಮಾನ್ಯವಾಗಿ ಕಪ್ಪು ಬಟ್ಟೆ ಉಡಿಸಿ ಎಳ್ಳು, ಕಡಲೆ ಮುಂತಾದ ಕಪ್ಪು ಬಣ್ಣದ ವಸ್ತುಗಳನ್ನು ಅರ್ಪಿಸುತ್ತಾರೆ. ಉಪವಾಸವನ್ನು ಪ್ರಾರ್ಥನೆಯ ನಂತರ ಸಂಜೆ ಅಂತ್ಯಗೊಳಿಸಿ ಪ್ರಸಾದ ಸ್ವೀಕರಿಸುವರು.

ಕೆಲವರು ಒಂದೇ ದಿನದಲ್ಲಿ ಒಂದೇ ಒಂದು ಊಟವನ್ನು ಮಾಡುತ್ತಾರೆ. ಕೆಲವರು ಸಂಪೂರ್ಣ ಉಪವಾಸವನ್ನು ಆಚರಿಸುತ್ತಾರೆ.