ಕಿಸಾನ್ ದಿನ

ಪ್ರಾಮುಖ್ಯತೆ ಮತ್ತು ಅವಲೋಕನ

ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ಡಿಸೆಂಬರ್ 23 ರಂದು ದೇಶದಾದ್ಯಂತ ಕಿಸಾನ್ ದಿನವೆಂದು ಆಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ ವಿಭಾಗೀಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ರೈತ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುವುದು. ರಾಜಕೀಯ ನಾಯಕರು ಭಾರತದ ಐದನೇ ಪಿಎಂ ಅವರ ಜನ್ಮ ದಿನಾಚರಣೆಯಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಾರೆ. ನವದೆಹಲಿಯ ಕಿಸಾನ್ ಘಾಟ್ ನಲ್ಲಿರುವ ಮಾಜಿ ಪ್ರಧಾನಿ ಸಮಾಧಿಗೆ ನಾಯಕರು ಭೇಟಿ ನೀಡುತ್ತಾರೆ.

ಸರ್ಕಾರ 2001ರಲ್ಲಿ ಪ್ರತಿ ವರ್ಷ ಡಿಸೆಂಬರ್ 23ನ್ನು ಕಿಸಾನ್ ದಿವಸ್ (ರೈತರ ದಿನ) ಎಂದು ಆಚರಿಸಲು ನಿರ್ಧರಿಸಿತು.

ಚೌಧರಿ ಚರಣ್ ಸಿಂಗ್ ಅವರು ಅಧಿಕಾರ ವಹಿಸಿಕೊಂಡ ಒಂದು ದಿನವೂ ಸಂಸತ್ ಕಲಾಪವನ್ನು ಎದುರಿಸದ ಭಾರತದ ಏಕೈಕ ಪ್ರಧಾನಿ ಎಂಬ ದಾಖಲೆ ಹೊಂದಿದ್ದಾರೆ.